ಭಾರತ, ಏಪ್ರಿಲ್ 27 -- Seetha Rama Serial: ಹೇಗಾದ್ರೂ ಮಾಡಿ ಸೀತಾ ಮತ್ತು ರಾಮನ ಮದುವೆಯನ್ನು ಮುರಿಯುವ ಪ್ಲಾನ್‌ನಲ್ಲಿದ್ದಾಳೆ ಭಾರ್ಗವಿ. ಅದಕ್ಕಾಗಿ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಆದರೆ, ಅದ್ಯಾವುದೂ ಫಲಿಸುತ್ತಿಲ್ಲ. ಇದೀಗ ಮೊಮ್ಮಗನ ಮದುವೆಯ ತರಾತುರಿಯಲ್ಲಿರುವ ತಾತ ಸೂರ್ಯ ಪ್ರಕಾಶ್‌ ದೇಸಾಯಿ ಹೇಗಾದ್ರೂ ಮಾಡಿ, ಆದಷ್ಟು ಬೇಗ ಸೀತಾ ರಾಮನ ಮದುವೆ ಮಾಡುವ ಪ್ಲಾನ್‌ನಲ್ಲಿದ್ದಾನೆ. ಆದರೆ, ಈ ನಡುವೆ ಅಚ್ಚರಿಯ ವಿಚಾರ ತಿಳಿದು ಕೊಂಚ ಶಾಕ್‌ಗೆ ಒಳಗಾಗಿದ್ದಾನೆ ಸೂರಿ.

ಮನೆಯಲ್ಲಿ ಆಸ್ತಿ ವಿಚಾರ ಚರ್ಚೆಯಾದ ಬಳಿಕ ನೇರವಾಗಿ ಸೀತಾ ಮನೆಗೆ ಹೋಗಿದ್ದಾನೆ ಸೂರಿ. ಶಾಂತಮ್ಮನ ವಠಾರಕ್ಕೆ ತೆರಳುತ್ತಿದ್ದಂತೆ, ತಾತನನ್ನು ನೋಡಿದ ತಕ್ಷಣ ಸಿಹಿ ಓಡೋಡಿ ಬಂದು ತಬ್ಬಿಕೊಂಡಿದ್ದಾಳೆ. ನಿಮ್ಮ ಮನೆನೋ ಇಲ್ಲೇ ಇರೋದಾ ಎಂದೆಲ್ಲ ಕೇಳಿದ್ದಾನೆ. ಜತೆಗೆ ನಾನಿಲ್ಲಿ ಸೀತಾ ಅವರ ಮನೆಗೆ ಬಂದಿದ್ದೇನೆ, ಅವರನ್ನು ಭೇಟಿ ಆಗಬೇಕಿತ್ತು ಎಂದಿದ್ದಾನೆ. ನಮ್ಮ ಸೀತಮ್ಮನ ಮನೆಗಾ.. ಬನ್ನಿ ಬನ್ನಿ ನಾನೇ ಕರೆದುಕೊಂಡು ಹೋಗ್ತಿನಿ ಅಂತ ಕರೆದುಕೊಂಡು...