Mangalore, ಫೆಬ್ರವರಿ 6 -- ಮಂಗಳೂರು: ತುಳುನಾಡಿನಲ್ಲಿ ದೈವಗಳ ಹರಿಕೆಯ ಕೋಲಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲೂ ಪಣೋಲಿಬೈಲು ಎಂಬಲ್ಲಿರುವ ದೈವಸ್ಥಾನಕ್ಕೆ ಕೋಲ ಸೇವೆ ನೀಡಲು ಹತ್ತೂರುಗಳಿಂದ ಜನರು ಆಗಮಿಸುತ್ತಾರೆ. ಯಾವುದಾದರೂ ಹರಿಕೆ ಹೊತ್ತರೆ ಅದು ಈಡೇರುತ್ತದೆ ಎಂಬ ನಂಬಿಕೆ ಇರುವ ಕಾರಣ ಪಣೋಲಿಬೈಲ್ ನಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಗಳಿಗೆ ಹರಿಕೆ ಹೇಳುವವರು ಸಾಕಷ್ಟು ಜನರಿದ್ದಾರೆ. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್ ಆಪ್ತ ಪ್ರಶಾಂತ್ ಕಾಜವ ಅವರು ಮನಸ್ಸಿನಲ್ಲಿ ಹರಿಕೆಯೊಂದನ್ನು ಹೊತ್ತಿದ್ದರಂತೆ. ಯು.ಟಿ.ಖಾದರ್ ಅವರಿಗೆ ಪುರುಸೊತ್ತಿರುವ ದಿನವನ್ನು ಗೊತ್ತುಮಾಡಿಸಿಕೊಂಡು ಬಂಟ್ವಾಳ ತಾಲೂಕು ಪಣೋಲಿಬೈಲ್ ಕಲ್ಲುರ್ಟಿ ಸನ್ನಿಧಿಯಲ್ಲಿ ಕೋಲ ಸೇವೆಯ ಹರಿಕೆಯನ್ನು ತೀರಿಸಲು ಅವರು ನಿಶ್ಚಯ ಮಾಡಿದರು. ಅದರಂತೆ ಭಾನುವಾರ ರಾತ್ರಿ ಸ್ಪೀಕರ್ ಖಾದರ್ ಉಪಸ್ಥಿತಿಯಲ್ಲಿ ಕೋಲ ನಡೆಯಿತು.

ಬಳಿಕ ದೈವಗಳ ಆಶೀರ್ವಾದವನ್ನು ಸ್ಪೀಕರ್ ಖಾದರ್ ಪಡೆದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿ...