ಭಾರತ, ಮೇ 2 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 1)ಸಂಚಿಕೆಯಲ್ಲಿ ಸಹನಾಗೆ ಬ್ರೈನ್‌ ಟ್ಯೂಮರ್‌ ಇದೆ, ಅವಳಿನ್ನು ಬದುಕೋದೇ ಆರು ತಿಂಗಳು, ಹಾಗಾಗಿ ನೀನು ಅಲ್ಲಿಯವರೆಗೆ ಅವಳ ಪ್ರೇಮಿಯಾಗಿರುವ ಎಂದು ಮೊಸಳೆ ಕಣ್ಣೀರು ಸುರಿಸಿದ್ದ, ಭಾರ್ಗವಿಯ ನಾಟಕವನ್ನು ನಂಬುತ್ತಾನೆ ಆಕಾಶ್‌. ಇತ್ತ ಸಹನಾ, ಇತ್ತ ಪುಷ್ಪಾ ಇಬ್ಬರ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಏನು ಎಂದು ತಿಳಿಯದ ಆಕಾಶ್‌ ಒಂದು ಕಡೆ ನಿಂತು ಒಬ್ಬನೇ ಯೋಚಿಸುತ್ತಿರುತ್ತಾನೆ. ಸಹನಾಳನ್ನು ಇಷ್ಟಪಟ್ಟಂತೆ ನಾಟಕ ಮಾಡಿದ್ರೂ ಇದ್ರಿಂದ ಪುಷ್ಪಾಳಿಗೆ ಮೋಸ ಮಾಡಿದ ಹಾಗೆ ಆಗುತ್ತದೆ, ಇನ್ನೂ ಸಹನಾ ಬದುಕೋದೇ 6 ತಿಂಗಳು, ಅವಳಿಗೆ ನೋವು ಕೊಡುವುದು ಹೇಗೆ ಚಿಂತಿಸುತ್ತಾ ನಿಂತಿರುತ್ತಾನೆ. ಆಗ ಪುಷ್ಪಾ ಕಾಲ್‌ ಮಾಡುತ್ತಾಳೆ. ಕಳೆದೆರಡು ದಿನಗಳಿಂದ ಖುಷಿಯಿಂದ ಮಾತನಾಡುತ್ತಿದ್ದ ಆಕಾಶ್‌ ಇಂದು ಪುಷ್ಪಾಳ ಬಳಿ ನೀರಸವಾಗಿ ಮಾತನಾಡುತ್ತಾನೆ. ಪುಷ್ಪಾಳ ಏನಾಯ್ತು ಎಂದು ಕೇಳಿದರೂ ಉತ್ತರ ಹೇಳುವುದಿಲ್ಲ. ಎಂದಿನಂತೆ ಪುಷ್ಪಾ ಆಕಾಶ್‌ಗೆ ಬುದ್ಧಿಮಾತು ಹೇಳುತ್ತಾಳೆ. ಯಾವುದೇ ಸಮಸ್ಯೆಗೂ ...