ಭಾರತ, ಮೇ 9 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 8) ಸಂಚಿಕೆಯಲ್ಲಿ ಕರ್ಚಿಫ್‌ ವಿಚಾರದಲ್ಲಿ ಹೆಂಡತಿಯನ್ನು ರೂಮಿಗೆ ಕಳುಹಿಸಿ, ತಾನು ಬರುವ ಆಕಾಶ್‌ ಮುತ್ತಿಗಾಗಿ ಬೇಡಿಕೆ ಇಡುತ್ತಾನೆ. ಮುತ್ತಿಗೆ ಎನರ್ಜಿ ಬೂಸ್ಟರ್‌ ಎಂದು ಕರೆಯುವ ಆಕಾಶ್‌, ತಾನು ಕಾಲೇಜಿನಲ್ಲಿ ದಿನವಿಡೀ ಎನರ್ಜಿಯಿಂದ ಇರಲು ತನಗೆ ಪುಷ್ಪಾಳಿಂದ ಎನರ್ಜಿ ಬೂಸ್ಟರ್‌ ಬೇಕೆಂದು ಬೇಡಿಕೆ ಇಡುತ್ತಾನೆ. ಇದಕ್ಕೆ ಒಪ್ಪದ ಪುಷ್ಪಾ ಹಿಂದಕ್ಕೆ ಹಿಂದಕ್ಕೆ ಹೋಗಿ ಹಾಸಿಗೆಯ ಮೇಲೆ ಬೀಳುತ್ತಾಳೆ. ಆಗ ಹುಡುಗಿಯೊಬ್ಬಳು ಜೋರಾಗಿ ಕೂಗಿಕೊಳ್ಳುತ್ತಾಳೆ. ಅದಕ್ಕೆ ಕಾರಣ ಬೆಡ್‌ಶೀಟ್‌ ಅಡಿ ಹುಡುಗಿಯೊಬ್ಬಳು ಅವಿತು ಕುಳಿತಿರುತ್ತಾಳೆ. ಮಕ್ಕಳೆಲ್ಲಾ ಸೇರಿ ಆಟವಾಡುವಾಗ ಅನುಪಮಾಳ ಮಗಳು ಹಾಸಿಗೆ ಮೇಲೆ ಬೆಡ್‌ಶೀಟ್‌ ಅಡಿ ಅವಿತು ಕೂತಿರುವುದನ್ನು ಪುಷ್ಪಾ-ಆಕಾಶ್‌ ಗಮನಿಸಿರುವುದಿಲ್ಲ. ಕೊನೆಗೆ ಆಕಾಶ್‌ಗೆ ಮುತ್ತು ನೀಡದೇ ಕಾಲೇಜಿಗೆ ಕಳುಹಿಸುತ್ತಾಳೆ ಪುಷ್ಪಾ.

ಕುಡಿದ ಮತ್ತೆಲ್ಲಾ ಇಳಿದು ಕಾಲೇಜಿಗೆ ಬರುವ ಸುನಾಮಿ ಇಂದು ಹೇಗಾದ್ರೂ ಸಹನಾ ಮುಂದೆ ಎಲ್ಲಾ ಸತ್ಯವನ್ನು ಹೇಳಬೇಕು ಎಂದು ನಿ...