Bengaluru, ಮೇ 2 -- Bhagyalakshmi Serial: ಪೆನ್ಶನ್‌ ವಿಚಾರವಾಗಿ ಕುಸುಮಾ ಬಹಳ ತಲೆ ಕೆಡಿಸಿಕೊಂಡಿದ್ದಾಳೆ. ಧರ್ಮರಾಜ್‌ ಸ್ನೇಹಿತರಿಗೆ ಕರೆ ಮಾಡಿ ಪೆನ್ಶನ್‌ ಹಣದ ಬಗ್ಗೆ ವಿಚಾರಿಸುತ್ತಿದ್ದಾಳೆ. ಮಗನ ಬಳಿ ದುಡ್ಡು ಕೇಳಬಹುದಲ್ಲಾ ಎಂಬ ಪ್ರಶ್ನೆಗೆ ಕುಸುಮಾ ಏನು ಉತ್ತರ ಹೇಳುವುದೆಂದು ತಿಳಿಯದೆ, ನನ್ನ ಮಗ ಬಹಳ ಬ್ಯುಸಿ, ಕೇಳೋಕೆ ಸಮಯ ಇಲ್ಲ ಎಂದು ಹೇಳುತ್ತಾ ತಡಬಡಾಯಿಸುತ್ತಿದ್ಧಾಳೆ.

ನಾನು ಏನು ಮಾಡಿದರೂ ಭಾವ ಜಗ್ಗುತ್ತಿಲ್ಲ, ಇವರನ್ನು ಎದುರಿಸಲು ಏನಾದರೂ ಮಾಡಲೇಬೇಕು ಎಂದು ಪೂಜಾ ಬೇಸರಗೊಳ್ಳುತ್ತಾಳೆ. ಇದೆಲ್ಲವನ್ನೂ ಇಲ್ಲೇ ಬಿಟ್ಟುಬಿಡಿ ದಯವಿಟ್ಟು, ಅಕ್ಕನಿಗೆ ನೋವು ಕೊಡಬೇಡಿ. ಇದರಿಂದ ಯಾರಿಗೂ ಒಳ್ಳೆಯದಲ್ಲ ಎಂದು ಪೂಜಾ, ತಾಂಡವ್‌ ಬಳಿ ಹೇಳುತ್ತಲೇ ಇದ್ದಾಳೆ. ಆದರೆ ತಾಂಡವ್‌ ಮಾತ್ರ ಯಾವುದಕ್ಕೂ ಹೆದರುತ್ತಲೇ ಇಲ್ಲ, ಪೂಜಾ ಎದುರು ಸವಾಲು ಹಾಕುವಷ್ಟು ಧೈರ್ಯದಿಂದ ಮೆರೆಯುತ್ತಿದ್ದಾನೆ. ಶ್ರೇಷ್ಠಾಗೆ ಡೈಮಂಡ್‌ ಬ್ರೇಸ್‌ಲೇಟ್‌ ಕೊಟ್ಟಿದ್ದರ ಬಗ್ಗೆ ಕೂಡಾ ಆತನಿಗೆ ಪಶ್ಚಾತಾಪ ಇಲ್ಲ. ನೀನು ಪೊಲೀಸ್‌ ಕಂಪ್ಲೇಂಟ್‌ ಕೊಡಲು...