ಬೆಂಗಳೂರು,ಮೈಸೂರು,Bengaluru,Mysuru, ಏಪ್ರಿಲ್ 30 -- ಬೆಂಗಳೂರು: ಕರ್ನಾಟಕದ ಪ್ರಮುಖ ದಲಿತ ನಾಯಕ, ಹಿರಿಯ ರಾಜಕಾರಣಿ ವಿ ಶ್ರೀನಿವಾಸ್ ಪ್ರಸಾದ್ ನಿನ್ನೆ (ಏಪ್ರಿಲ್ 29) ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಬರೋಬ್ಬರಿ 5 ದಶಕ ತನ್ನದೇ ಆದ ರೀತಿಯಲ್ಲಿ ರಾಜಕಾರಣ ಮಾಡಿ ವಿಶಿಷ್ಟ ಛಾಪು ಮೂಡಿಸಿದ್ದವರು ವಿ. ಶ್ರೀನಿವಾಸ ಪ್ರಸಾದ್. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಸ್ವಯಂಸೇವಕರಾಗಿ ಬೆಳೆದವರಾದರೂ ರಾಜಕಾರಣದ ವಿಚಾರದಲ್ಲಿ ತಮ್ಮದೇ ನಿಲುವು ಹೊಂದಿ, ಅದರಂತೆ ನಡೆದವರು.

ವಿ ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕಾರಣದ ಕೊನೆಯ ಘಟ್ಟದಲ್ಲಿ ಬಿಜೆಪಿಯಲ್ಲಿದ್ದರು ಎಂಬುದು ವಿಶೇಷ. ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿದ ಅವರು ಜನತಾ ಪಾರ್ಟಿ, ಜನತಾದಳ ಯು, ಜನತಾದಳ ಎಸ್‌, ಕಾಂಗ್ರೆಸ್, ಸಮತಾ ಪಾರ್ಟಿ, ಬಿಜೆಪಿ ಹೀಗೆ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ನಡೆಸಿದವರು. ಇವೆಲ್ಲದರ ನಡುವೆಯೂ ಅವರು ಸಂಘದ ಗರಡಿಯಲ್ಲಿ ಬಾಲ್ಯ ಕಳೆದವರು ಎಂಬುದು ಗಮನ ಸೆಳೆದ ಅಂಶವಾಗಿತ್ತು.

ಹೀಗಾಗಿ, ವಿ. ಶ್ರೀನಿವಾಸ್...