Bangalore, ಏಪ್ರಿಲ್ 30 -- ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಾಟೇರ ಸಿನಿಮಾ, ಶ್ರೀರಸ್ತು ಶುಭಮಸ್ತು, ರಾಧಾ ರಮಣದಂತಹ ಸೀರಿಯಲ್‌ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಶ್ವೇತಾ ಆರ್‌ ಪ್ರಸಾದ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾದಲ್ಲೂ ಶ್ವೇತಾ ಪ್ರಸಾದ್‌ ನಟಿಸಿದ್ದರು. ಸದ್ಯ ಇವರು ಹಂಚಿಕೊಂಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ.

ಆರ್‌ಜೆ ಪ್ರದೀಪ್‌ ಪತ್ನಿ ಶ್ವೇತಾ ಪ್ರಸಾದ್‌ ಹಂಚಿಕೊಂಡ ಹೊಸ ಫೋಟೋ ನೋಡಿ ಅಭಿಮಾನಿಗಳು, ಆತ್ಮೀಯರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಹಾಟ್‌, ನಮ್ಮ ಬೆಂಗಳೂರು ತಾಪಮಾನ ಏರಿಕೆಗೆ ಏನು ಕಾರಣ ಅಂತ ಈಗ ಗೊತ್ತಾಯ್ತು" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಮೊದ್ಲೆ ತಾಪಮಾನ ಜಾಸ್ತಿ, ಇನ್ನೂ ಜಾಸ್ತಿ ಆಗುತ್ತೆ" "ಸ್ಯಾಂಡಲ್‌ವುಡ್‌ನ ನಿಜವಾದ ಕ್ವೀನ್‌" "ಬೆಂಕಿ" "ಬ್ಯೂಟಿಫುಲ್‌" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: ಮಂದಾಕ...