ಮಂಡ್ಯ ಲೋಕಸಭೆ ಟಿಕೆಟ್ ಮಿಸ್ ಮಾಡಿಕೊಂಡ ಸುಮಾಲತಾಗೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಯ ಆಫರ್; ವರ್ಕೌಟ್ ಆಗುತ್ತಾ ಬಿಜೆಪಿ ಹೊಸ ಪ್ಲಾನ್?
ಭಾರತ, ಮಾರ್ಚ್ 18 -- ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election 2024) ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಮಂಡ್ಯ (Mandya) ಲೋಕಸಭಾ ಚುನಾವಣೆಗೆ ಅಖಾಡ ಮತ್ತಷ್ಟು ರಂಗೇರುತ್ತಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮನವೊಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಹೀಗಾಗಿ ಭಾನುವಾರವೇ ಸುಮಲತಾ ದೆಹಲಿ ತಲುಪಿದ್ದಾರೆ. ಇಂದು (ಮಾರ್ಚ್ 18, ಸೋಮವಾರ) ಪ್ರಮುಖವಾಗಿ ರಾಜ್ಯ ರಾಜಕೀಯ, ಟಿಕೆಟ್, ಕ್ಷೇತ್ರದ ಕುರಿತು ಚರ್ಚೆ ನಡೆಯಲಿದ್ದು, ಸ್ಪರ್ಧೆಯ ಬಗ್ಗೆ ಅಂತಿಮವಾಗಲಿದೆ. ಬಹುತೇಕ ಚಿಕ್ಕಬಳ್ಳಾಪುರದಲ್ಲೇ ಸ್ಪರ್ಧಿಸುವಂತೆ ನಾಯಕರು ಮನವೊಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಅಸ್ತ್ರವನ್ನು ಪ್ರಯೋಗಿಸಿ ಕಾಂಗ್ರೆಸ್, ಬಿಜೆಪಿ ಪರೋಕ್ಷ ಬೆಂಬಲದೊಂದಿಗೆ ಜಯ ಸಾಧಿಸಿದ್ದ ಹ...
Click here to read full article from source
To read the full article or to get the complete feed from this publication, please
Contact Us.