ಭಾರತ, ಮೇ 2 -- ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಬುಧವಾರದ ಸಂಚಿಕೆಯಲ್ಲಿ ಕೆಲವೊಂದು ಘಟನೆಗಳು ನಡೆದಿವೆ. ನೆಕ್ಲೆಸ್‌ ವಿಚಾರವಾಗಿ ಭೂಮಿಕಾ ಚಿಂತಿಸುತ್ತಿದ್ದಾಳೆ. ಹಳೆಯ ಕೆಲಸಕ್ಕೆ ಹಿಂತುರುಗುವ ಕುರಿತು ಆಲೋಚಿಸುತ್ತಿದ್ದಾರೆ. ನಾನು ಹೇಳಿದ ನೆಕ್ಲೆಸ್‌ ಹಾಕಿಕೊಂಡಿಲ್ಲ ಮತ್ತು ಮಂದಾಕಿನಿ ರೋಲ್ಡ್‌ ಗೋಲ್ಡ್‌ ಕೊಟ್ಟ ವಿಚಾರದಿಂದ ಭೂಮಿಕಾ ಚಿಂತಿಸುತ್ತಿದ್ದಾರೆ. ಆದಷ್ಟು ಬೇಗ ಅಡವಿಟ್ಟ ಒಡವೆ ಬಿಡಿಸಬೇಕು ಹೇಗೆ ಎಂದು ಯೋಚಿಸುತ್ತಾರೆ. ಮತ್ತೊಂದೆಡೆ ಮಲ್ಲಿಗೆ ಜೈದೇವ್‌ ಸಮಧಾನ ಹೇಳುತ್ತಾನೆ. ಅಳಬೇಡ ಎಂದೆಲ್ಲ ನಾಟಕವಾಡುತ್ತಾನೆ. "ನೀನಂದ್ರೆ ತುಂಬಾ ಇಷ್ಟ. ನನಗೆ ನಿನ್ನ ಬಗ್ಗೆ ಏನೂ ಕೆಟ್ಟ ಅಭಿಪ್ರಾಯವಿಲ್ಲ" ಎಂದೆಲ್ಲ ನಾಟಕೀಯ ಮಾತುಗಳನ್ನಾಡುತ್ತಾನೆ. ಈತನ ನಾಟಕವನ್ನು ನಿಜವೆಂದು ನಂಬಿರುವ ಮಲ್ಲಿ ಕರಗುತ್ತಾಳೆ.

ಗೌತಮ್‌ ಮನೆಯಲ್ಲಿ ಕುಳಿತು ತನ್ನ ಡೈರಿಯಲ್ಲಿ ಬರೆಯುತ್ತಾನೆ. ಭೂಮಿ ಕೊಟ್ಟ ಗಿಫ್ಟ್‌ನ ನೆನಪಲ್ಲಿ ಖುಷಿಯಲ್ಲಿ ಇರುತ್ತಾನೆ. "ಇವತ್ತು ನನ್ನ ಜೀವನದಲ್ಲಿ ಮರೆಯಲು ಆಗದ ದಿನ. ಭೂಮಿಕಾಳಿಂದ ನನಗೆ ಬಾಲ್ಯದ ನೆ...